SWR GM assured to Dandeli Rail Forum that Dharwad - Ambewadi(Dandeli) Passenger service to be started from July.
-
ಜುಲೈನಿಂದ ದಾಂಡೇಲಿ-ಧಾರವಾಡ ರೈಲು ಸಂಚಾರ
June 9, 2019 2:47 AM No Comments
ಹುಬ್ಬಳ್ಳಿ:...
more... ದಾಂಡೇಲಿ-ಧಾರವಾಡ ಮಧ್ಯೆ ಜುಲೈನಿಂದ ಪ್ರಯಾಣಿಕರ ರೈಲು ಸಂಚಾರ ಪ್ರಾರಂಭಗೊಳ್ಳಲಿದೆ.
ದಾಂಡೇಲಿ ಸಮಗ್ರ ಅಭಿವೃದ್ಧಿಗಾಗಿ ಹೋರಾಟ ಸಮಿತಿಗೆ ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್ ಈ ಭರವಸೆ ನೀಡಿದ್ದಾರೆ.
ಸಮಿತಿ ಪದಾಧಿಕಾರಿಗಳು ನಿಯೋಗದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ರೈಲ್ವೆ ವಲಯದ ಮಹಾಪ್ರಬಂಧಕ ಅಜಯಕುಮಾರ ಸಿಂಗ್ ಅವರಿಗೆ ಈ ಕುರಿತು ಮನವಿ ಸಲ್ಲಿಸಿದರು. ಮೊದಲು ಪ್ರಲ್ಹಾದ ಜೋಶಿ ಅವರನ್ನು ಭೇಟಿ ಮಾಡಿದ ಸಮಿತಿ ಪದಾಧಿಕಾರಿಗಳು, ದಾಂಡೇಲಿವರೆಗೆ ಪ್ರಯಾಣಿಕರ ರೈಲು ಸಂಚಾರದ ಮಹತ್ವದ ಕುರಿತು ವಿವರಿಸಿದರು. ತಕ್ಷಣವೇ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಹಾಗೂ ನೈಋತ್ಯ ರೈಲ್ವೆ ವಲಯದ ಜಿಎಂ ಅಜಯಕುಮಾರ ಸಿಂಗ್ ಅವರಿಗೆ ಫೋನಾಯಿಸಿದ ಜೋಶಿ ಬೇಡಿಕೆ ಈಡೇರಿಕೆ ಬಗ್ಗೆ ಗಮನ ಹರಿಸುವಂತೆ ಸೂಚಿಸಿದರು.
ಸ್ಪಂದಿಸಿದ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಈ ಕುರಿತು ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಸೂಚಿಸುವುದಾಗಿ ತಿಳಿಸಿದರು. ನಂತರ ರೈಲ್ವೆ ಜಿಎಂ ಸಿಂಗ್ ಅವರನ್ನು ಭೇಟಿಯಾದ ನಿಯೋಗದ ಸದಸ್ಯರು, ದಾಂಡೇಲಿ ರೈಲು ಸಂಪರ್ಕ ಹೊಂದಿತ್ತು. ಆದರೆ ಸರಕು ಸಾಗಣೆ ರೈಲಿಗೆ ಆದ್ಯತೆ ನೀಡಲಾಗಿತ್ತು. ಈಗಿರುವ ರೈಲು ನಿಲ್ದಾಣ ದಾಂಡೇಲಿ ತಾಲೂಕಿನ ಅಂಬೇವಾಡಿಯಲ್ಲಿದ್ದು, ಈ ನಿಲ್ದಾಣವನ್ನು ದಾಂಡೇಲಿ ರೈಲ್ವೆ ನಿಲ್ದಾಣವೆಂದು ಮರುನಾಮಕರಣ ಮಾಡುವಂತೆ ಒತ್ತಾಯಿಸಿದರು.
ಈ ರೈಲು ಮಾರ್ಗ ಹತ್ತು ವರ್ಷಗಳ ಹಿಂದೆಯೇ ಬ್ರಾಡ್ಗೇಜ್ ಆಗಿದೆ. ಪ್ರಯಾಣಿಕರ ರೈಲು ಓಡಿಸುವಂತೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಸದಾನಂದಗೌಡ ರೈಲ್ವೆ ಸಚಿವರಾಗಿದ್ದಾಗ ಬಜೆಟ್ನಲ್ಲಿ ಪ್ರಯಾಣಿಕರ ರೈಲು ಸಂಚಾರಕ್ಕೆ ಸೂಚಿಸಿದ್ದರೂ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ಬೇಡಿಕೆ ಈಡೇರಿರಲಿಲ್ಲ. ಈಗಲಾದರೂ ಪ್ರಯಾಣಿಕರ ರೈಲು ಸಂಚಾರ ಪ್ರಾರಂಭಿಸಿ ಸಹಕರಿಸಿ ಎಂದರು.
ಮನವಿ ಸ್ವೀಕರಿಸಿದ ಜಿಎಂ ಅಜಯಕುಮಾರ ಸಿಂಗ್, ದಾಂಡೇಲಿ-ಧಾರವಾಡ ಮಧ್ಯೆ ಪ್ರಯಾಣಿಕರ ರೈಲು ಪ್ರಾರಂಭಿಸಲಾಗುವುದು. ನಂತರ ಹುಬ್ಬಳ್ಳಿಯವರೆಗೆ ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಪದಾಧಿಕಾರಿಗಳಾದ ಅಕ್ರಮ ಖಾನ್, ಅಶೋಕ ಪಾಟೀಲ, ಬಲವಂತ ಬೊಮ್ಮನಹಳ್ಳಿ, ಮಹೇಶ ಮೇತ್ರಿ, ಅಬ್ದುಲ್ವಾಹಬ್ ಬನ್ಸಾರಿ, ಡಿ.ಎಂ. ಮುಲ್ಲಾ, ಇದ್ದರು.